ತಾಳಮದ್ದಳೆ ಸಪ್ತಾಹ, ಹರಿಕಥಾ ಭದ್ರಗಿರಿ ಪುಣ್ಯಸ್ಮರಣೆ
ಲೇಖಕರು : ಸತೀಶ್ ನಾಯಕ್ , ಪಕಳಕು೦ಜ
ಗುರುವಾರ, ನವ೦ಬರ್ 27 , 2014
|
ನವ೦ಬರ್ 25, 2014
|
ತಾಳಮದ್ದಳೆ ಸಪ್ತಾಹ, ಹರಿಕಥಾ ಭದ್ರಗಿರಿ ಪುಣ್ಯಸ್ಮರಣೆ
ಬೆಳ್ತಂಗಡಿ :
ಯಕ್ಷಗಾನದ ಮೂಲಕ ಪುರಾಣದ ತಿಳಿವಳಿಕೆ ಜತೆಗೆ ಸಾಮಾಜಿಕ ಬದ್ಧತೆಯೂ ದೊರೆಯುತ್ತದೆ ಎಂದು ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಆನುವಂಶಿಕ ಆಡಳಿತ ಮೊಕ್ತೇಸರ ಯು. ವಿಜಯ ರಾಘವ ಪಡ್ವೆಟ್ನಾಯ ಹೇಳಿದರು.
ಉಜಿರೆ ಜನಾರ್ದನ ದೇವಸ್ಥಾನದ ಶ್ರೀ ರಾಮಕೃಷ್ಣ ಮಂಟಪದಲ್ಲಿ ಶ್ರೀ ಜನಾರ್ದನ ದೇವಸ್ಥಾನದ ಆಶ್ರಯದಲ್ಲಿ ಕುರಿಯ ವಿಠಲ ಶಾಸ್ತ್ರಿ ಯಕ್ಷಗಾನ ಪ್ರತಿಷ್ಠಾನ ಮತ್ತು ನೆಡ್ಳೆ ನರಸಿಂಹ ಭಟ್ಟ ಯಕ್ಷಗಾನ ಪ್ರತಿಷ್ಠಾನ ನೇತೃತ್ವದಲ್ಲಿ ಕಲೆ- ಕಲಾವಿದ- ಪೋಷಕ ಕೆ.ವಿ. ಮುಚ್ಚಿ ನ್ನಾಯ ನೆನಪಿನ ಯಕ್ಷಗಾನ ತಾಳಮದ್ದಳೆ ಸಪ್ತಾಹ, ಹರಿಕಥಾ ಭದ್ರಗಿರಿ ಪುಣ್ಯಸ್ಮರಣೆಯನ್ನು ಸೋಮವಾರ ಉದ್ಘಾಟಿಸಿ ಮಾತನಾಡಿದರು. ಯಕ್ಷಗಾನದ ಮೂಲಕ ನೈತಿಕ ಜವಾಬ್ದಾರಿ ಹೆಚ್ಚಿಸುವ ಸಂದೇಶಗಳು ಲಭಿಸುತ್ತವೆ ಎಂದರು.
ಹಿರಿಯ ಕಲಾವಿದ ಮೂಡಂಬೈಲು ಗೋಪಾಲಕೃಷ್ಣ ಶಾಸ್ತ್ರಿ, ಕೆ. ಶ್ರೀಶ ಮುಚ್ಚಿನ್ನಾಯ, ಗೋಪಾಲ ರಾವ್ ಉಪಸ್ಥಿತರಿದ್ದರು. ಕುರಿಯ ವಿಠಲ ಶಾಸ್ತ್ರಿ ಯಕ್ಷಗಾನ ಪ್ರತಿಷ್ಠಾನದ ಸಂಚಾಲಕ ಉಜಿರೆ ಅಶೋಕ್ ಭಟ್ ಪ್ರಾಸ್ತಾವಿಕ ಮಾತನಾಡಿದರು. ಕಾರ್ಯಕ್ರಮದ ಸಂಯೋಜಕ ಡಾ. ಶ್ರುತಕೀರ್ತಿರಾಜ್ ಕಾರ್ಯಕ್ರಮ ನಿರ್ವಹಿಸಿದರು.
ತಾಳಮದ್ದಳೆ ಸಪ್ತಾಹದ ಅಂಗವಾಗಿ ಮೊದಲ ದಿನ ಗಿರೀಶ್ ರೈ ಕಕ್ಯಪದವು ಭಾಗವತಿಕೆ, ಪದ್ಮನಾಭ ಉಪಾಧ್ಯಾಯ ಮದ್ದಳೆ, ದೇವಾನಂದ ಭಟ್ ಚೆಂಡೆ, ಮೂಡಂಬೈಲು ಗೋಪಾಲಕೃಷ್ಣ ಶಾಸ್ತ್ರಿ, ಶಂಭು ಶರ್ಮ ವಿಟ್ಲ, ಶ್ರೀಧರ ಡಿ.ಎಸ್. ಕಿನ್ನಿಗೋಳಿ, ಶ್ರೀರಮಣ ಆಚಾರ್ ಕಾರ್ಕಳ, ಸುರೇಶ್ ಶೆಟ್ಟಿ ಪುಂಜಾಲಕಟ್ಟೆ ಮುಮ್ಮೇಳದಲ್ಲಿ 'ಅತಿಕಾಯ ಮೋಕ್ಷ' ಪ್ರಸಂಗ ನಡೆಯಿತು.
ಕೃಪೆ :
http://www.vijaykarnataka.com
|
|
|